2021 ರ ಉತ್ತರಾಖಂಡ ಪ್ರವಾಹವು ಫೆಬ್ರವರಿ 7, 2021 ರಂದು ಯುನೆಸ್ಕೋದ ವಿಶ್ವ ಪರಂಪರೆಯ ತಾಣವಾದ ನಂದಾ ದೇವಿ ರಾಷ್ಟ್ರೀಯ ಉದ್ಯಾನವನದ ಪರಿಸರದಲ್ಲಿ ಪ್ರಾರಂಭವಾಯಿತು. ಭಾರತದ ಉತ್ತರಾಖಂಡ್ ರಾಜ್ಯದ ಹೊರಗಿನ ಗರ್ವಾಲ್ ಹಿಮಾಲಯದಲ್ಲಿ (ನಕ್ಷೆಗಳು 1 ಮತ್ತು 2). [3] ಇದು ಭೂಕುಸಿತ, ಹಿಮಪಾತ ಅಥವಾ ಹಿಮಪಾತದ ಸರೋವರದಿಂದ ಉಂಟಾದ ಪ್ರವಾಹದಿಂದ ಉಂಟಾಗಿದೆ ಎಂದು ನಂಬಲಾಗಿದೆ. ಇದು ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಪ್ರವಾಹಕ್ಕೆ ಕಾರಣವಾಗಿದೆ; ಮುಖ್ಯವಾಗಿ ಋಷಿಗಂಗಾ ನದಿ, ಧೌಲಿಗಂಗಾ ನದಿ, ಮತ್ತು ಪ್ರತಿಯಾಗಿ ಗಂಗಾನದಿಯ ಪ್ರಮುಖ ಉಪನದಿಗಳು(ಹೆಡ್ ಸ್ಟ್ರೀಮ್) (ನಕ್ಷೆಗಳು 2 ಮತ್ತು 3) ಅಲಕಾನಂದಗಳಲ್ಲಿ ಪ್ರವಾಹ ಉಂತಾಗಿದೆ. ಕನಿಷ್ಠ 50 ಜನರು ಸಾವನ್ನಪ್ಪಿದ್ದಾರೆ ಎಂದು ದೃಡಪಡಿಸಲಾಗಿದೆ, ಮತ್ತು 150 ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ. == ಕಾರಣ == ಕೆಲವು ವರದಿಗಳ ಪ್ರಕಾರ, ಫೆಬ್ರವರಿ 7 ರ ಆರಂಭದಲ್ಲಿ ನಂದಾದೇವಿ ಹಿಮನದಿಯ ಒಂದು ಭಾಗ (ಹಿಮ)ಮುರಿದು, ಮಂಜುಗಡ್ಡೆಯ ಹಿಂದೆ ಸಿಕ್ಕಿಬಿದ್ದ ನೀರನ್ನು ಬಿಡುಗಡೆ ಮಾಡಿತು. ಅದು ಹಿಮಸರೋವರವು ಹಿಮಸ್ಪೋಟವಾಗಿ ಪ್ರವಾಹವನ್ನು ಉಂಟುಮಾಡುತು. ಇತರ ವರದಿಗಳು ಮತ್ತು ಉಪಗ್ರಹ ಚಿತ್ರಗಳು, ಭೂಕುಸಿತವು ಘಟನೆಗಳನ್ನು ಪ್ರಚೋದಿಸಿರಬಹುದು ಎಂದು ಸೂಚಿಸುತ್ತದೆ. ಫೆಬ್ರವರಿ 13, 2021 ರಂದು, ದಿ ಟೈಮ್ಸ್, ಲಂಡನ್, ಹಿಮನದಿಯ ಒಂದು ಭಾಗವು ಸೀಳುಬಿಟ್ಟು (ಟೋರ್ನ- ಹರಿದು) ಭೂಕುಸಿತಕ್ಕೆ ಕಾರಣವಾಗಿ ಪ್ರವಾಹ ಉಂಟಾಗಿದೆ ಎಂದು ವರದಿ ಮಾಡಿದೆ. ಉಪಗ್ರಹ ಚಿತ್ರಗಳಲ್ಲಿ, ನಂದಾ ದೇವಿ ಅಭಯಾರಣ್ಯದ ನೈಋತ್ಯ ಅಂಚಿನಲ್ಲಿರುವ 20,700 ಅಡಿ (6,300 ಮೀ) ಶಿಖರದ ನಂದಾ ಘುಂಟಿಯ ಇಳಿಜಾರುಗಳಲ್ಲಿ 0.5 ಮೈಲಿ (0.80 ಕಿಮೀ) ಗಾಯದ (ಸ್ಕಾರ್) ಗುರುತು ಗೋಚರಿಸುತ್ತದೆ, ಇದು ನಂದಾ ದೇವಿ ಮಾಸಿಫ್ ( , .ನಂದಾದೇವಿ ಪರ್ವತ ಸಮೂಹದಲ್ಲಿ ಏಕಾಂಗಿ ಹೊರಶಿಖರ- ನಕ್ಷೆಗಳು) 2, 3, ಮತ್ತು 4). ಹವಾಮಾನ ಬದಲಾವಣೆಯಿಂದ ಉಂಟಾಗುವ ಉಷ್ಣಾಂಶ ಮತ್ತು ಭಾರತದ ಹಿಮಾಲಯನ್ ನದಿ ಕಣಿವೆಗಳಲ್ಲಿ ಅಣೆಕಟ್ಟುಗಳು ಮತ್ತು ಜಲ ವಿದ್ಯುತ್ ಸ್ಥಾವರಗಳ ನಿರ್ಮಾಣದ ತ್ವರಿತ ಹೆಚ್ಚಳಕ್ಕೆ ತಜ್ಞರು ಈ ವಿಪತ್ತನ್ನು ಕಾರಣವೆಂದು ಲೇಖನವು ವರದಿ ಮಾಡಿದೆ. ಸೈಂಟಿಫಿಕ್ ಅಮೇರಿಕನ್, 12 ಫೆಬ್ರವರಿ 2011 ರ ಲೇಖನವೊಂದರ ಪ್ರಕಾರ, ಕ್ಯಾಲ್ಗರಿ ವಿಶ್ವವಿದ್ಯಾನಿಲಯದ ಭೂರೂಪಶಾಸ್ತ್ರಜ್ಞ ಡಾನ್ ಶುಗರ್ ಅವರು ಪ್ಲಾನೆಟ್ ಲ್ಯಾಬ್ಸ್‌ನ ದತ್ತಾಂಶವನ್ನು ವ್ಯಾಖ್ಯಾನಿಸಿದ್ದಾರೆ, ನೇತಾಡುವ ಹಿಮನದಿ ( ) "15 ಫುಟ್‌ಬಾಲ್ ಮೈದಾನಗಳು ಉದ್ದ ಮತ್ತು ಐದು ಅಡ್ಡಲಾಗಿ" ಪರ್ವತದಿಂದ ಬೇರ್ಪಟ್ಟಿದೆ ಎಂದು ಸೂಚಿಸುತ್ತದೆ ಮತ್ತು ಋಷಿಗಂಗಾದ ಉಪನದಿಯಾದ ರೊಂಟಿಗ್ಯಾಡ್‌ ಒಳಗೆ ಕುಸಿದಿದೆ (). (ನಕ್ಷೆ 3, 30 ° 28 'ಎನ್, 79 ° 45' ಇ; ನಕ್ಷೆ 2, ಅತಿಕಡಿಮೆಯ ಎಡ-ಬ್ಯಾಂಕ್ ಉಪನದಿ). == ಹಾನಿ == ನಕ್ಷೆ 4: ತೀವ್ರವಾಗಿ ಬಾಧಿತವಾದ ಕೆಲವು ಸ್ಥಳಗಳು: ಉತ್ತರ ನಂದಾ ದೇವಿ ಹಿಮನದಿ, ಷಿ ಗಂಗಾ ನದಿ, ಧೌಲಿ ಗಂಗಾ ನದಿ, ರಿನಿ / ರೆನಿ / ರೈನಿ ಗ್ರಾಮ, ಜೋಶಿಮಠ. ಧವಲಿಗಂಗಾ ನದಿಯ ಉಪನದಿಯಾದ ಋಷಿಗಂಗಾ ನದಿಯ ಮೇಲಿನ ಋಷಿಗಂಗಾ ವಿದ್ಯುತ್ ಯೋಜನೆ ಹಾನಿಗೊಳಗಾಯಿತು, ಮತ್ತು ಯೋಜನೆಯಲ್ಲಿ ಕೆಲಸ ಮಾಡುತ್ತಿರುವ 35 ಕಾರ್ಮಿಕರು ಕಾಣೆಯಾಗಿದ್ದಾರೆ ಎಂದು ಆರಂಭದಲ್ಲಿ ಭಾವಿಸಲಾಗಿತ್ತು. ಆದರೆ ಅದಕ್ಕೂ ಹೆಚ್ಚು ಕಾರ್ಮಿಕರು ಕಾಣೆಯಾಗಿದ್ದರು. ಉತ್ತರಾಖಂಡದ ಚಮೋಲಿ ಜಿಲ್ಲೆಯು ಹೆಚ್ಚುತ್ತಿರುವ ಧೌಲಿಗಂಗಾ ನದಿಯಿಂದ ತೀವ್ರವಾಗಿ ಹಾನಿಗೊಳಗಾಯಿತು.ಋಷಿಗಂಗಾ ಮತ್ತು ಧವಲಿಗಂಗಾ ನದಿಗಳ ಸಂಗಮದಲ್ಲಿರುವ ಧೌಲಿಗಂಗ ಅಣೆಕಟ್ಟು (30 ° 33′45 ″ 79 ° 34′33 ″ ನಲ್ಲಿ) ಪ್ರವಾಹದ ನೀರಿನಿಂದ ಕೊಚ್ಚಿ ಹೋಗಿದೆ. ಉತ್ತರಾಖಂಡದ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರು ಎನ್‌ಟಿಪಿಸಿ ಒಡೆತನದ ದೊಡ್ಡ ಜಲವಿದ್ಯುತ್ ಯೋಜನೆಯ ಮೇಲೆ ಪರಿಣಾಮ ಬೀರಿತು ಎಂದು ಹೇಳಿದರು, ಸುಮಾರು 176 ಕಾರ್ಮಿಕರು ಆ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದು, ಆ ಕಾರ್ಮಿಕರು ಎರಡು ಸುರಂಗಗಳಲ್ಲಿ ಸಿಕ್ಕಿಬಿದ್ದಿದ್ದರು. 13 ಹಳ್ಳಿಗಳನ್ನು ಸಂಪರ್ಕಿಸುವ ತಪೋವನ್ ಪ್ರದೇಶದ ಸೇತುವೆ ಹಿಮಪಾತದಲ್ಲಿ ಕೊಚ್ಚಿ ಹೋಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಪ್ರವಾಹದಿಂದ ಹೆಚ್ಚು ಹಾನಿಗೊಳಗಾದ ಸ್ಥಳಗಳಲ್ಲಿ ಜೋಶಿಮಠ, ರಿನಿ, ನಂದಾ ದೇವಿ ರಾಷ್ಟ್ರೀಯ ಉದ್ಯಾನ, ತಪೋವನ್ ವಿಷ್ಣುಗಡ್ ಜಲವಿದ್ಯುತ್ ಸ್ಥಾವರ ಮತ್ತು ಶ್ರೀಧರ್ ಇವು ಸೇರಿವೆ. == ಪರಿಹಾರ ಪ್ರಯತ್ನಗಳು == ಹರಿದ್ವಾರ್ ಮತ್ತು ಋಷಿಕೇಶ ಪಟ್ಟಣಗಳನ್ನು ತಲುಪದಂತೆ ಪ್ರವಾಹದ ನೀರನ್ನು ತಡೆಯಲು ಅಧಿಕಾರಿಗಳು ನದಿಯ ಕೆಳಗೆ ಎರಡು ಅಣೆಕಟ್ಟುಗಳನ್ನು ಖಾಲಿ ಮಾಡಿದ್ದರಿಂದ ಅನೇಕ ಗ್ರಾಮಗಳನ್ನು ಮೊದಲೇ ಸ್ಥಳಾಂತರಿಸಲಾಯಿತು. ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆಯ (ಎನ್‌ಡಿಆರ್‌ಎಫ್) 3 ತಂಡಗಳೊಂದಿಗೆ ಎರಡು ಸಿ -130 ಜೆ ಸೂಪರ್ ಹರ್ಕ್ಯುಲಸ್ ಅನ್ನು ರಕ್ಷಣಾ ಕಾರ್ಯಾಚರಣೆಯಲ್ಲಿ ನಿಯೋಜಿಸಲಾಗಿದೆ. ಎನ್‍ಡಿಆರ್‍ಎಫ್‍ನ ಮಹಾನಿರ್ದೇಶಕರ ಪ್ರಕಾರ, ರಕ್ಷಣಾ ಪ್ರಯತ್ನಗಳು 2 ದಿನಗಳವರೆಗೆ ತೆಗೆದುಕೊಳ್ಳಬಹುದು. ಸುರಂಗದೊಳಗೆ ಸಿಕ್ಕಿಬಿದ್ದ 16 ಕಾರ್ಮಿಕರನ್ನು ತುರ್ತು ಸಿಬ್ಬಂದಿ ರಕ್ಷಿಸುವಲ್ಲಿ ಯಶಸ್ವಿಯಾದರು. ಎರಡನೇ ಸುರಂಗದಲ್ಲಿ ಇನ್ನೂ 35 ರಿಂದ 40 ಕಾರ್ಮಿಕರು ಸಿಕ್ಕಿಬಿದ್ದಿದ್ದಾರೆಂದು ಭಾವಿಸಲಾಗಿದೆ. ಎನ್‌ಟಿಪಿಸಿ 5 ಕಿ.ಮೀ (3.1 ಮೈಲಿ) ಕೆಳಗಡೆ ನಿರ್ಮಿಸುತ್ತಿರುವ ತಪೋವನ್ ವಿಷ್ಣುಗಡ್ ಜಲವಿದ್ಯುತ್ ಯೋಜನಾ ಸ್ಥಳದಲ್ಲಿ, ರಕ್ಷಕರು ಸಿಕ್ಕಿಬಿದ್ದಿದ್ದಾರೆಂದು ಹೇಳಲಾದ ಕನಿಷ್ಠ 30 ಕಾರ್ಮಿಕರನ್ನು ರಕ್ಷಿಸಲು ಸುರಂಗದೊಳಗೆ ಹೋಗಲು ಪ್ರಯತ್ನಿಸುತ್ತಿದ್ದಾರೆ. ಇತ್ತೀಚಿನ ವರದಿಯಂತೆ ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ನೀರ್ಗಲ್ಲು ಕುಸಿತದಿಂದ ಉಂಟಾದ ಪ್ರವಾಹಕ್ಕೆ ಸಿಕ್ಕಿಕೊಂಡವರ ಪತ್ತೆ ಕಾರ್ಯ 10ನೇ ದಿನವೂ ಮುಂದುವರಿದಿದೆ. ದಿ.೧೬-೨-೨೦೨೧ ಮಂಗಳವಾರ ಎರಡು ಶವಗಳನ್ನು ಹೊರತೆಗೆಯಲಾಗಿದೆ. ಒಟ್ಟು ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 58ಕ್ಕೆ ಏರಿದೆ. ಇನ್ನೂ 146 ಮಂದಿ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇಲ್ಲಿಯವರೆಗೆ ತಪೋವನ–ವಿಷ್ಣುಗಡ್ ಯೋಜನೆಯ ಸುರಂಗದಲ್ಲಿ 11 ಶವಗಳು ಪತ್ತೆಯಾಗಿವೆ. ಚಮೋಲಿ ಜಿಲ್ಲೆಯ ತಪೋವನ ಸುರಂಗವನ್ನು ಕೇಂದ್ರೀಕರಿಸಿ ವಿವಿಧ ಏಜೆನ್ಸಿಗಳು ರಕ್ಷಣಾ ಕಾರ್ಯ ಕೈಗೊಂಡಿವೆ. ಅಲ್ಲಿ ಸುಮಾರು 30 ಕಾರ್ಮಿಕರು ಸಿಕ್ಕಿಬಿದ್ದಿರುವ ಅಂದಾಜಿದೆ. == == ' – 1; ' – 2; === ಮೃತರ ಸಂಖ್ಯೆ ಏರಿಕೆ === ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ನೀರ್ಗಲ್ಲು ಕುಸಿತ- ಸ್ಪೋಟದ ಅವಘಡ ಸಂಬಂಧಿಸಿದಂತೆ ರಕ್ಷಣಾ ಕಾರ್ಯ 15 ನೇ ದಿನವೂ ಮುಂದುವರಿದಿದೆ. 20-2-2021 ಶನಿವಾರ ತಪೋವನ–ವಿಷ್ಣುಗಡ್ ಯೋಜನೆಯ ಸ್ಥಳದಲ್ಲಿ ಎರಡು ಶವಗಳನ್ನು ಹೊರತೆಗೆಯಲಾಯೊತು. ಶನಿವಾರ ಸಂಜೆ ಮೂರು ಶವಗಳು ಪತ್ತೆಯಾಗಿತ್ತು. ರಾತ್ರಿ ವೇಳೆಗೆ ಇನ್ನೂ ಎರಡು ಶವಗಳು ಸಿಕ್ಕಿವೆ. ಈ ಮೂಲಕ ಮೃತ ಕಾರ್ಮಿಕರ ಸಂಖ್ಯೆ 67ಕ್ಕೆ ಏರಿಕೆಯಾಯೊತು. 137 ಮಂದಿ ಕಾರ್ಮಿಕರು ನಾಪತ್ತೆಯಾಗಿದ್ದಾರೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಫೆಬ್ರುವರಿ 7 ರಂದು ಚಮೋಲಿ ಜಿಲ್ಲೆಯ ರಿಷಿಗಂಗಾದ ಬಳಿ ನೀರ್ಗಲ್ಲು ಕುಸಿತ- ಸ್ಪೋಟ ಸಂಭವಿಸಿತ್ತು. ಇದರಿಂದಾಗಿ ಸಂಭವಿಸಿದ ಪ್ರವಾಹದಲ್ಲಿ 13.2 ಮೆಗಾವಾಟ್ ಸಾಮರ್ಥ್ಯದ ರಿಷಿಗಂಗಾ ಜಲವಿದ್ಯುತ್ ಯೋಜನೆಯ ಸ್ಥಾವರ ಸಂಪೂರ್ಣ ನಾಶಗೊಂಡಿದೆ. ತಪೋವನ–ವಿಷ್ಣುಗಡ್ ಯೋಜನೆಗೂ ಭಾರಿ ಹಾನಿಯಾಗಿದೆ. == ನೋಡಿ == ಕೇದಾರನಾಥ ಮತ್ತು ಪ್ರಕೃತಿ ವಿಕೋಪ == ಉಲ್ಲೇಖಗಳು == == ಉಲ್ಲೇಖ ==